ಹುಟ್ಟಿ ಬಾ ಗಾಂಧೀ ಮತ್ತೊಮ್ಮೆ

ಜೋಪಡಿಯ ಒಳಗಿಂದ
ಖಾಲಿ ಮಡಕೆಯ ಮುಂದೆ
ಅಳುವ ಕಂದನ ಕೂಗು
ಕೇಳಿರುವೆ.

ಸತ್ತ ನಗರದ ರಾಜರಸ್ತೆಯ
ಓಣಿಯಲಿ
ರಾತ್ರಿ ರಾಣಿಯರ ಬೇಹಾರ
ಕಂಡಿರುವೆ.

ನೆಟ್ಟ ಫಸಲಿಗೆ ಕಟ್ಟದ ಬೆಲೆ
ಹೊಟ್ಟೆಗೆ ಒದ್ದೆ ಬಟ್ಟೆ,
ಕಟ್ಟಿ ಮಲಗಿದ ರೈತನ ಕಣ್ಣೀರು
ನೋಡಿರುವೆ.

ಧರ್ಮ ಭೋಧಿಸಿ,
ಪುಷ್ಕಲ ತಿಂದು
ಹಾಯಾಗಿ ಪವಡಿಸಿದ
ಧರ್ಮಾತ್ಮರ ಗೊರಕೆ ಶಬ್ದಕ್ಕೆ
ಬೆದರಿರುವೆ.

ಮೊಣಕೈಗೆ ಸವರಿದ ಬೆಲ್ಲ
ಗದ್ದುಗೆಯ ಮೇಲೇರಿದ ಮಲ್ಲ
ಪುಳ್ಳ ಪುಢಾರಿಯ ರಾಜ ಠೀವಿಗೆ
ಬೆರಗಾಗಿರುವೆ.

ಎಲ್ಲ ನೋವಿನ ಮಧ್ಯೆ
ನೋವ ಕಣ್ಗಳ ಸೆಳೆತ
ಆರಿದ ಗಂಟಲೊಳಗಿಂದ
ಗೀರಲು ಶಬ್ಧ.

ಉಳಿದದ್ದು ಒಂದೇ
ಕೊನೆಗೊಮ್ಮೆ
ಹುಟ್ಟಿ ಬಾ ಗಾಂಧೀ,
ಮತ್ತೊಮ್ಮೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧರ್ಮಸಂಸ್ಥಾಪನಾರ್ಥಾಯ
Next post ಭಯೋತ್ಪಾದನೆ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys